ಬೆಂಗಳೂರು: ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡರು ಪಕ್ಷದಿಂದ ಏನೂ ಮಾಡಿಕೊಂಡಿಲ್ಲವಾ? ನನ್ನಿಂದ ಸ್ವಲ್ಪವೂ ಅವರಿಗೆ ಅನುಕೂಲ ಆಗಿಲ್ಲವಾ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಅವರಿಗಾಗಿ ಕೆಲಸ ಮಾಡುತ್ತೇನೆ, ಎಲ್ಲ ಅಧಿಕಾರವವನ್ನು ಅವರೇ ಪಡೆದುಕೊಳ್ಳಲಿ, ಆದರೆ ಯಾರು ಯಾವಾಗ ಪಕ್ಷ ಬಿಟ್ಟು ಹೋಗುತ್ತಾರೆ ಎಂಬುದನ್ನು ಹೇಳುವುದಕ್ಕೆ ಆಗುತ್ತದೆಯೇ’ ಎಂದು ವಿವರಿಸಿದ್ದಾರೆ.
ನೂತನ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿ, ‘ನೀವೇ ನಮ್ಮ ಗುರುಗಳು ಅಂತ ಹೇಳುತ್ತಾರೆ, ಅವರೇ ಇವರಿಗೆ ಟೋಪಿ ಹಾಕಿ ಹೋಗಿದ್ದು ಗೊತ್ತಿಲ್ಲವೇ?’ ಎಂದು ಚುಚ್ಚಿದರು. ನನ್ನ ಷಷ್ಠ್ಯಬ್ದಪೂರ್ತಿ ಸಮಾರಂಭಕ್ಕೆ ಜಿ.ಟಿ. ದೇವೇಗೌಡರನ್ನು ಬಿಟ್ಟು ಎಲ್ಲರೂ ಬಂದು ಊಟ ಮಾಡಿ ಹೋಗಿದ್ದಾರೆ ಯಾರೂ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
Advertisement