ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯ ಆಪರೇಷನ್ ಕಮಲ, ರಾಜ್ಯಪಾಲರ ಭಾಷಣದ ವೇಳೆ ಪ್ರತಿಭಟನೆ, ನಾಳೆ ಹಾಗೂ ಫೆ 8 ರ ಬಜೆಟ್ ಮಂಡನೆಗೆ ಅಡ್ಡಿ ಮಾಡುವ ಶಾಸಕರ ಮೇಲೆ ಸ್ಪೀಕರ್ ಅವರು ಶಿಸ್ತು ಕ್ರಮ ಕೈಗೊಂಡು, ಸಂಸದೀಯ ಕಾರ್ಯಕಲಾಪದ ಘನತೆಯನ್ನು ಎತ್ತಿ ಹಿಡಿಯುವುದು ಸಹ ಒಂದು ಭಾಗವಾಗಿದೆ. ಈ ಮೂಲಕ ಬಜೆಟ್ ಅಧಿವೇಶವನ್ನು ಸುಗಮವಾಗಿ ಸಂಪನ್ನಗೊಳಿಸುವ ಕಾರ್ಯತಂತ್ರವೂ ಇದರಲ್ಲಿ ಅಡಗಿದೆ ಎನ್ನಲಾಗಿದೆ.