ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಮಾತನಾಡಿ, ಶಿಕ್ಷಣ, ದಾಸೋಹ, ಆಶ್ರಯ ಒದಗಿಸುವುದು ಸಾಮಾನ್ಯ ಕೆಲಸವಲ್ಲ. ಅವರು ಜಾತಿಮತ ನೋಡಿದವರಲ್ಲ. ಎಲ್ಲ ಜಾತಿಧರ್ಮದವರಿಗೆ ಅವಕಾಶ ಕಲ್ಪಿಸಿದ್ದರು. ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಒತ್ತು ನೀಡಿದ್ದ ಮಹಾನ್ ಚೇತನ. ಇದೇ ರೀತಿ ಜಾರ್ಜ್ ಫರ್ನಾಂಡೀಸ್ ನಿಧನ ಸಹ ತಮಗೆ ನೋವು ತಂದಿದೆ ಎಂದರು.