ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಜೆ.ಸಿ. ಮಾಧುಸ್ವಾಮಿ, “ಸದನದ ಹೊರಗೆ ನಡೆದಿರುವ ಘಟನಾವಳಿಗಳನ್ನು ಸದನದ ಹಕ್ಕುಚ್ಯುತಿ ಮತ್ತು ನ್ಯಾಯಾಂಗ ನಿಂದನೆ ಎಂದು ಬಿಂಬಿಸುವುದು ಎಷ್ಟರ ಮಟ್ಟಿಗೆ ಸರಿ? ಇದನ್ನು ಸಭಾಧ್ಯಕ್ಷರು ಭಾವನಾತ್ಮಕ ಮತ್ತು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲಾ ಶಾಸಕರು ಸಭಾಧ್ಯಕ್ಷರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆಯ್ಕೆ ಮಾಡಿದ ಶಾಸಕರೇ ವಿಶ್ವಾಸ ಇಟ್ಟಿರುವಾಗ, ಅಪನಂಬಿಕೆ ವ್ಯಕ್ತಪಡಿಸದೇ ಇರುವಾಗ, ಸಭಾಧ್ಯಕ್ಷರು ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದು ಸಮಂಜಸವಲ್ಲ. ಇದನ್ನು ಇಲ್ಲಿಗೆ ಬಿಟ್ಟುಬಿಡುವುದು ಒಳ್ಳೆಯದು. ಆದರೆ ಒಟ್ಟಾರೆ ಈ ಪ್ರಕರಣದಲ್ಲಿ ಯಾರು ಪಾತ್ರಧಾರಿಗಳು, ಯಾರು ಸೂತ್ರಧಾರಿಗಳು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇದಕ್ಕೆ ನಮ್ಮ ಬೆಂಬಲವಿದೆ, ಸಹಕಾರವಿದೆ” ಎಂದರು.