ಬಿಜೆಪಿಯ ಬಸವರಾಜ ಬೊಮ್ಮಾಯಿ ಮಾತನಾಡಿ, ಮುಖ್ಯಮಂತ್ರಿಗಳು ಸುದ್ದಿಗೋಷ್ಠಿ ನಡೆಸಿ ವಿಷಯ ಪ್ರಸ್ತಾಪಿಸಿರುವ ಉದ್ದೇಶ ಇದೀಗ ಸ್ಪಷ್ಟವಾಗಿದೆ ಎಂದು ಕಿಚಾಯಿಸಿದಾಗ, ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭಾಧ್ಯಕ್ಷರು ಮಧ್ಯೆ ಪ್ರವೇಶಿಸಿ ನನ್ನನ್ನು ಆಟದ ವಸ್ತುವಾಗಿ ಬಳಸಿಕೊಳ್ಳಲು ಆಡಳಿತ ಹಾಗೂ ಪ್ರತಿ ಪಕ್ಷ ಸೇರಿದಂತೆ ಯಾರಿಗೂ ಸಾಧ್ಯವಿಲ್ಲ. ಸರ್ಕಾರದ ಸೇವೆಯಲ್ಲಿ ಇರುವವರೆಲ್ಲ ಅವರ ಅಧೀನದಲ್ಲಿರುತ್ತಾರೆ ಎಂಬ ಭಾವನೆ ಬೇಡ. ಈ ಪರಿಸ್ಥಿತಿಯಲ್ಲಿ ನ್ಯಾಯಾಂಗ ತನಿಖೆ ಸಾಧ್ಯವಿಲ್ಲ ಎಂದರು. ಆಗಲೂ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಏರಿ ದನಿಯಲ್ಲಿ ವಾಗ್ವಾದ ಮುಂದುವರೆದಾಗ ಸಭಾಧ್ಯಕ್ಷರು ಕಲಾಪವನ್ನು ಅರ್ಧಗಂಟೆ ಕಾಲ ಮುಂದೂಡಿದರು.