ಈ ಬಗ್ಗೆ ಮಾತನಾಡಿರುವ ಜೆಡಿಎಸ್ ಮಾಧ್ಯಮ ವಕ್ತಾರ ಹೊಂಗೆರೆ ರಘು, 'ಕ್ಷೇತ್ರದ ಅಭಿವೃದ್ಧಿಗೆ ಪ್ರೀತಂ ಗೌಡ ಒಂದು ರೂಪಾಯಿ ಅನುದಾನ ತಂದಿಲ್ಲ. ಶಾಸಕ ಎಂಬ ಶಿರೋನಾಮೇಯಡಿ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ದೇವರು ಯಾರಿಗೂ ನೂರು, ಇನ್ನೂರು ವರ್ಷ ಬದುಕು ಎಂದು ಬಾಂಡ್ ಬರೆದು ಕಳುಹಿಸಿರುವುದಿಲ್ಲ. ಜೆಡಿಎಸ್ ವರಿಷ್ಠ ದೇವೇಗೌಡರಿಗೆ ರಾಜಕೀಯದಲ್ಲಿ ಆಗಿರುವಷ್ಟು ಅನುಭವ ಅವರಿಗೆ ವಯಸ್ಸಾಗಿಲ್ಲ. ಸಾಂದರ್ಭಿಕವಾಗಿ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಅವರ ಬಗ್ಗೆ ಲಘುವಾಗಿ ಮಾತನಾಡಿದವರೆಲ್ಲ ಠೇವಣಿ ಇಲ್ಲದಂತೆ ಹೆಸರಿಲ್ಲದೆ ಕಣ್ಮರೆಯಾಗಿದ್ದಾರೆ. ಪ್ರೀತಂ ಗೌಡ ಕೂಡಲೇ ಜಿಲ್ಲೆಯ ಜನತೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಜಿಲ್ಲೆಯ ಜನತೆ ದಂಗೆ ಹೇಳಬೇಕಾಗುತ್ತದೆ’ ಎಂದು ಎಚ್ಚರಿಸಿದರು