ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಅವರನ್ನು ಸುತ್ತುವರಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದೊಂದಿಗೆ ತಾವು ಮುನಿಸಿಕೊಂಡಿರುವುದು ನಿಜ. ಪಕ್ಷದ ಕೆಲ ನಿರ್ಣಯಗಳು ತಮಗೆ ಬೇಸರತಂದಿದೆ. ಬಜೆಟ್ ನಲ್ಲೂ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ನಾನು ಎಲ್ಲಿಗೂ ಹೋಗಿಲ್ಲ, ಇಲ್ಲಿಯೇ ಇದ್ದೇನೆ ಎಂದಿರುವ ಶಾಸಕ ಮಹೇಶ್, ಇಲ್ಲಿ ಕೆಲ ತಪ್ಪು ಗ್ರಹಿಕೆಗಳು ಉಂಟಾಗಿದ್ದು, ಅದನ್ನು ಬಗೆಹರಿಸಬೇಕಿದೆ ಎಂದೂ ಹೇಳಿದ್ದಾರೆ.