ನಂತರ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಗೆ ಭೇಟಿ ನೀಡಿದ ಸುಮಲತಾ ರೈತ ನಾಯಕ ದಿವಂಗತ ಕೆ.ಎಸ್ ಪುಟ್ಟಣ್ಣಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಪುಟ್ಟಣ್ಣಯ್ಯ ಪತ್ನಿ ಸುನೀತಾ ಮತ್ತು ಮಗ ದರ್ಶನ್ ಅವರನ್ನ ಭೇಟಿಯಾದರು, ನಂತರ ಜನರನ್ನುದ್ದೇಶಿಸಿ ಮಾತನಾಡಿದ ಸುಮಲತಾ, ಅಂಬರೀಷ್ ಮತ್ತು ಪುಟ್ಟಣ್ಣಯ್ಯ ಅವರ ನಡುವಿನ ಸ್ನೇಹ ವಿಶ್ವಾಸವನ್ನು ಸ್ಮರಿಸಿದರು. ಈಗ ಇಬ್ಬರು ನಾಯಕರು ನಮ್ಮ ಜೊತೆಯಿಲ್ಲ, ಅಂಬರೀಷ್ ಗೆ ತೋರಿದ ಪ್ರೀತಿಯನ್ನು ನೀವು ಅಭಿಷೇಕ್ ಗೂ ನೀಡಿ ಎಂಗದು ಸುಮಲತಾ ಮನವಿ ಮಾಡಿದರು.