ಹಲವು ದಿನಗಳಿಂದ ಬಾಕಿ ಉಳಿದಿದ್ದ ನಿಗಮ ಮಂಡಳಿ ಹಾಗೂ ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ಸಿಎಂ ಇಂದು ಅಂಕಿತ ಹಾಕಿದ್ದಾರೆ. ಆದರೆ, ನಿರೀಕ್ಷೆಯಂತೆ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್ಡಿಸಿಎಲ್), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳು (ಬಿಎಂಟಿಸಿ) ಕಾಂಗ್ರೆಸ್ ಕೈತಪ್ಪಿವೆ. ಕಾಂಗ್ರೆಸ್ ಒಳಗಿನ ಹಗ್ಗಜಗ್ಗಾಟದಿಂದಲೇ ಆಯಕಟ್ಟಿನ ಬಿಡಿಎ ಅಧ್ಯಕ್ಷ ಹುದ್ದೆಯನ್ನೂ ಕಳೆದುಕೊಳ್ಳುವಂತಾಗಿದೆ.