ಕುಮಟಾದ ಹೊಲನಗದ್ದೆ ನಿವಾಸಿ ಲಕ್ಷ್ಮಣ್ ನಾರಾಯಣ ಹರಿಕಂತ್ರ, ಮಾದನಗೇರಿ ಸತೀಶ್ ಈಶ್ವರ ಹರಿಕಂತ್ರ, ಮಂಕಿ ನಿವಾಸಿ ರವಿ ನಾಗಪ್ಪ, ಭಟ್ಕಳದ ಹರೀಶ್ ಶನಿಯಾರ ಮೊಗೇರ, ರಮೇಶ್ ಶನಿಯಾರ ಮೊಗೇರ, ದಾಮೋದರ ಹಾಗೂ ಬೋಟಿನ ಕ್ಯಾಪ್ಟನ್ ಮಲ್ಪೆಯ ಬಾಲಚಂದ್ರ ಮಲ್ಪೆ ಸೇರಿ ಒಟ್ಟು 7 ಜನ ಮೀನುಗಾರರ ತಂಡ ಡಿಸೆಂಬರ್ 11ರಂದು ಸುವರ್ಣ ತ್ರಿಭುಜ ಎಂಬ ಬೋಟು ಹತ್ತಿ ಸಮುದ್ರಕ್ಕೆ ಇಳಿದಿದ್ದರು.