ನಾನು ತಮಾಷೆ ಮಾಡಿದೆ ಅಷ್ಟೆ: ಬಿಜೆಪಿ ಸೇರುತ್ತೇನೆ ಎಂದು ಹೇಳಿ ಉಲ್ಟಾ ಹೊಡೆದ ಶಾಸಕ ಗಣೇಶ್ ಹುಕ್ಕೇರಿ!

ಬಿಜೆಪಿ ಸೇರುತ್ತೇನೆ ಎಂದು ಫೋನ್‌ನಲ್ಲಿ ತಮಾಷೆಗಾಗಿ ಹೇಳಿದ್ದೆ. ಇದಕ್ಕೆ ಯಾವುದೇ ರೀತಿಯ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್‌ ...
ಗಣೇಶ್ ಹುಕ್ಕೇರಿ
ಗಣೇಶ್ ಹುಕ್ಕೇರಿ
ಬೆಂಗಳೂರು: ಬಿಜೆಪಿ ಸೇರುತ್ತೇನೆ ಎಂದು ಫೋನ್‌ನಲ್ಲಿ ತಮಾಷೆಗಾಗಿ ಹೇಳಿದ್ದೆ. ಇದಕ್ಕೆ ಯಾವುದೇ ರೀತಿಯ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್‌ ಹುಕ್ಕೇರಿ ಸ್ಪಷ್ಟಪಡಿಸಿದ್ದಾರೆ. 
ಪತ್ರಕರ್ತರೊಬ್ಬರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದ, ಗಣೇಶ್ ಹುಕ್ಕೇರಿ, ಯಡಿಯೂರಪ್ಪ ನಾಯಕತ್ವ ನನಗೆ ತುಂಬಾ ಇಷ್ಟವಾಗಿದೆ, ಹೀಗಾಗಿ ಜನವರಿ 19ರಂದು ಬಿಜೆಪಿ ಸೇರುವುದಾಗಿ ಹೇಳಿದ್ದರು, ನಂತರ ಈ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ, ನಾನು ತಮಾಷೆಗಾಗಿ ಹೇಳಿದೆ, ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ,
ಕಾಂಗ್ರೆಸ್‌ ಪಕ್ಷ ನಮ್ಮ ಕುಟುಂಬಕ್ಕೆ ಎಲ್ಲವನ್ನೂ ನೀಡಿದೆ. ಆ ಪಕ್ಷವನ್ನು ಬಿಡುವ ಮಾತೇ ಇಲ್ಲ. ಲೋಕಸಭೆ ಚುನವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಬೇರೆ ಪಕ್ಷಕ್ಕೆ ಹೋಗುವ ಪ್ರಮೇಯವೇ ಇಲ್ಲ ಗಣೇಶ್‌ ಹುಕ್ಕೇರಿ ತಿಳಿಸಿದ್ದಾರೆ. 
ನಮ್ಮ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಪರಮೇಶ್ವರ್‌ ಅವರು ಎಲ್ಲ ರೀತಿಯ ಸಹಕಾರ ಕೊಟ್ಟಿದ್ದಾರೆ. ಪಕ್ಷ ಬಿಟ್ಟು ಹೋಗಿ ಕೈ ಕೊಡುವ ಇಚ್ಛೆ ನನಗಿಲ್ಲ ಎಂದು ಗಣೇಶ್ ಹುಕ್ಕೇರಿ ಟ್ವೀಟ್ ಮಾಡಿದ್ದಾರೆ
ಇದಕ್ಕೂ ಮುನ್ನ ಮಾತನಾಡಿದ ಗಣೇಶ್‌ ಹುಕ್ಕೇರಿ ತಂದೆ ಸಂಸದ ಪ್ರಕಾಶ್‌ ಹುಕ್ಕೇರಿ, ನಾವ್ಯಾರೂ ಬಿಜೆಪಿಗೆ ಹೋಗುವುದಿಲ್ಲ. ಇವೆಲ್ಲ ಮಾಧ್ಯಮಗಳಲ್ಲಿ ಬರುತ್ತಿರುವ ವದಂತಿ ಅಷ್ಟೆ ಎಂದು ತೆರೆ ಎಳೆದಿದ್ದಾರೆ. ಈ ಬಗ್ಗೆ ನನ್ನ ಮಗ ಗಣೇಶ್‌ ಹುಕ್ಕೇರಿ ಸ್ಪಷ್ಟನೆ ನೀಡಿದ್ದಾನೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದೂ ಅವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com