ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ವಿಜಯನಗರ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗುವವರಲ್ಲ. ಅವರು ಪಕ್ಷದಲ್ಲಿಯೇ ಇರುತ್ತಾರೆ. ಕೆಲವೊಂದು ಕಾರಣಗಳಿಂದ ಅವರು ರಾಜೀನಾಮೆ ನೀಡಿರಬಹುದು. ಅವರ ಜೊತೆ ನಾನು ಮಾತನಾಡಿ, ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ಅವರಿಗೆ ವೈಯುಕ್ತಿಕವಾಗಿ ಆದ ನೋವಿನಿಂದಾಗಿ ರಾಜೀನಾಮೆ ನಿರ್ಧಾರ ನೀಡಿರಬಹುದು. ಆದರೆ ಮುಂದಿನ ದಿನಗಳಲ್ಲಿ ಯಾವುದೇ ಶಾಸಕರು ರಾಜೀನಾಮೆ ನೀಡುವುದಿಲ್ಲ, ಅವರಿಗೆಲ್ಲಾ ಅಧಿಕಾರ, ಸಚಿವ ಸ್ಥಾನದ ಆಸೆಯಿರುತ್ತದೆ ಎಂದು ತಿಳಿಸಿದರು.