ರಾಯಚೂರು: ಸಮ್ಮಿಶ್ರ ಸರ್ಕಾರದ ಇಬ್ಬರು ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕವೂ ಸಹ ವಿರೋಧ ಪಕ್ಷ ಬಿಜೆಪಿಯೊಡನೆ ಸಂಪರ್ಕದಲ್ಲಿರುವ ಕಾಂಗ್ರೆಸ್ ಶಾಅಸಕರ ಒಂದು ಗುಂಪು ಇನ್ನೂ ಕಾದು ನೋಡುವ ಯೋಜನೆಯನ್ನೇ ಮುಂದುವರಿಸಿದೆ.ಬಿಜೆಪಿಯ ಮೂಲಗಳ ಪ್ರಕಾರ, ರಾಯಚೂರು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಈಗ ಪಕ್ಷ ತೊರೆದು ಬಿಜೆಪಿ ಸೇರುವ ಇರಾದೆಯಲ್ಲಿದ್ದಾರೆ.ಇಬ್ಬರು ಶಾಸಕರು ಪ್ರಸ್ತುತ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ, ಆದಾಗ್ಯೂ, ಅವರು ತಮ್ಮ ನಿರ್ಧಾರವನ್ನು ಜಾರಿಗೆ ತರಲು ಕೆಲವು ಷರತ್ತನ್ನು ಹೊಂದಿದ್ದಾರೆ.