ಕಾಂಗ್ರೆಸ್ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್, “ಇದು ದುಃಖಕರವಾಗಿದೆ. ನನ್ನ ಮಟ್ಟಿಗೆ, ಅವರು ಅಧ್ಯಕ್ಷರಾಗಿದ್ದವರು ಮುಂದೆಯೂ ಅಧ್ಯಕ್ಷರಾಗಿಯೇ ಇರುತ್ತಾರೆ.ಅವರು ಇನ್ನೂ ನನ್ನ ನಾಯಕರಾಗಿದ್ದಾರೆ. ’’ ಎಂದರೆ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ, “ಈ ನಿರ್ಧಾರದಿಂದ ನಾವೆಲ್ಲರೂ ತೀವ್ರವಾಗಿ ನೊಂದಿದ್ದೇವೆ. ಮೋದಿ ಸರ್ಕಾರದ ದುಷ್ಪರಿಣಾಮಗಳ ವಿರುದ್ಧ ಹೋರಾಡಲು ಅಥವಾ ಅವರ ತಪ್ಪನ್ನು ಎತ್ತಿ ತೋರಿಸಲು ಅವರು ರಾಷ್ಟ್ರದ ಉದ್ದಕ್ಕೂ ಪ್ರವಾಸ ಮಾಡಿದ್ದರು, ಆದರೆ ಅನೇಕರು ಅವರನ್ನು ಬೆಂಬಲಿಸಲಿಲ್ಲ. ಅವರು ದೊಡ್ಡ ನಾಯಕರಾಗಿದ್ದರು. ’’ ಎಂದರು.