ಕೆಲವು ಅತೃಪ್ತ ಶಾಸಕರು ಸಿದ್ದರಾಮಯ್ಯ ಪುನಃ ಮುಖ್ಯಮಂತ್ರಿ ಆಗಲಿ ಎನ್ನುತ್ತಿದ್ದಾರೆ ಎಂದು ಡಿಕೆಶಿ ಸೂಚಿಸಿದ ಬೆನ್ನಲ್ಲೇ ಗೌಡರು ಸ್ಪಷ್ಟ ಮಾತುಗಳಿಂದ ಅದನ್ನು ನಿರಾಕರಿಸಿದ್ದಾರೆ."ಸಿದ್ದರಾಮಯ್ಯ ಬೆಂಬಲಿಗರೇ ರಾಜೀನಾಮೆ ನೀಡಿದ್ದಾರೆ. ಅವರ ಮುಖಾಂತರ ಸಿದ್ದರಾಮಯ್ಯನವರೇ ಈ ಬೇಡಿಕೆ ಇಡುತ್ತಿದಾರೆ. ಆದರೆ ಇದಕ್ಕೆ ನಮ್ಮ ಪಕ್ಷ ಒಪ್ಪಲ್ಲ. ನಾಲ್ಕಾರು ಶಾಸಕರು ಹೇಳಿದಾಕ್ಷಣ ಸಿಎಂ ಮಾಡುವುಕ್ಕೆ ಆಗುವುದಿಲ್ಲ ಎಂದು ದೇವೇಗೌಡ ಗುಡುಗಿದ್ದಾರೆ.