ಮುಂಬಯಿ: ಯಾರ್ ಏನೇ ಹೇಳಿದ್ರೂ ಜಪ್ಪಯ್ಯಾ ಅಂದ್ರು ನಾನು ಇಲ್ಲಿಂದ ಹೋಗಲ್ಲ, ನಾನು ಒಬ್ಬನೇ ಬಂದಿದ್ದೇನೆ, ಒಬ್ಬನೇ ಹೋರಾಡುತ್ತೇನೆ ಎಂದು ಸಚಿವ ಡಿ,ಕೆ ಶಿವಕುಮಾರ್ ಮುಂಬಯಿ ಹೋಟೆಲ್ ಬಳಿ ಬಿಗಿಪಟ್ಟು ಹಿಡಿದು ನಿಂತಿದ್ದಾರೆ,.
ಒಳಗೆ ನನ್ನ ಸ್ನೇಹಿತರನ್ನು ಕೂಡಿ ಹಾಕಲಾಗಿದೆ, ಅವರನ್ನು ಭೇಟಿ ಮಾಡದ ಹೊರತು ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ರಿನೈಸೆನ್ಸ್ ಹೋಟೆಲ್ ಬಳಿ ಶಿವಕುಮಾರ್ ಕಾದು ಕುಳಿತಿದ್ದಾರೆ. ಬಿಜೆಪಿಯವರು ಲಕ್ಷ ಲಕ್ಷ ಘೋಷಣೆ ಕೂಗಿದರೂ ನಾನು ಯಾರಿಗೂ ಹೆದರಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಾವೆಲ್ಲ ರಾಜಕೀಯದಲ್ಲಿ ಜತೆಜತೆಯಲ್ಲಿಯೇ ಬೆಳೆದಿದ್ದೇವೆ. ನಾವು ರಾಜಕೀಯದಲ್ಲೇ ಸಾಯುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಅತೃಪ್ತ ಶಾಸಕರು ರಿನೈಸೆನ್ಸ್ ಹೋಟೆಲ್ ಹಿಂಬದಿ ಗೇಟ್ ನಿಂದ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿದೆ, ಬಸ್ ನಿಂದ ಮುಂಬಯಿಯ ಬೇರೆ ಹೋಟೆಲ್ ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
K'taka crisis: Shivakumar arrives in Mumbai to meet rebel MLAs, says 'born together in politics, will die together'