ಡಿ.ಕೆ ಶಿವಕುಮಾರ್ ಅವರು ಈ ನಾಟಕವನ್ನು ಇಲ್ಲಿಗೆ ನಿಲ್ಲಿಸಬೇಕು, ಇದೆಲ್ಲಾವನ್ನು ಕಳೆದ ಒಂದು ವರ್ಷದಿಂದ ನೋಡಿ, ನೋಡಿ ಸಾಕಾಗಿದೆ, ನಾವು ಇವತ್ತು ಯಾರೋಂದಿಗೂ ಮಾತನಾಡುವ ಮನಸ್ಥಿತಿಯಲ್ಲಿಲ್ಲ, ನಾವು ತುಂಬಾ ಮನನೊಂದಿದ್ದೇವೆ, ಇದೆಲ್ಲಾವನ್ನು ಇಲ್ಲಿಗೆ ಬಂದ್ ಮಾಡಿ, ಇನ್ನೂ ನಾಲ್ಕು ಜನ ಶಾಸಕರು ಇಂದು ನಮ್ಮನ್ನು ಬಂದು ಸೇರಲಿದ್ದಾರೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ. ಅವರು ಸ್ನೇಹಿತರಾಗಿದ್ದರೇ ಇಷ್ಟು ದಿನ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ.