ಬೆಂಗಳೂರಿನ ಕುಮಾರ ಕೃಪಾ ಅತಿಥಿಗೃಹದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಡಿಕೆ ಶಿವಕುಮಾರ್, ಮುಂಬೈಯಿಂದ ಮಧ್ಯರಾತ್ರಿ ಬಂದೆ. ನನ್ನನ್ನು ಡಿಪಾರ್ಟ್ ಮಾಡಿದ್ದರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆದುಕೊಳ್ಳೋ ರೀತಿಯಲ್ಲ, ನಾನು ಟೂರ್ ಹಾಕ್ಕೊಂಡು ಹೋಗಿದ್ದೆ, ಅತೃಪ್ತರು ಭೇಟಿ ಮಾಡದಿರಲಿಲು ಮನವಿ ಮಾಡಿದ್ದಾರೆ ಅಂದರು, ಹೋಟೆಲ್ ರಿಸರ್ವೇಶನ್ ಬುಕ್ ಮಾಡಿ ನಂತರ ಕ್ಯಾನ್ಸಲ್ ಮಾಡಿದ್ದಾರೆ ಎಂದು ಕಿಡಿಕಾರಿದರು.