ರೆಸಾರ್ಟ್ ರಾಜಕೀಯ ಮುಂದುವರಿಕೆ; ಸಂಡೇ ಮೂಡ್‍ನಲ್ಲಿ ಶಾಸಕರು

ರಾಜ್ಯದ ರಾಜಕೀಯ ಬಿಕ್ಕಟ್ಟು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಮೂರೂ ಪಕ್ಷಗಳ ನಾಯಕರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ರಾಜಕೀಯ ಬಿಕ್ಕಟ್ಟು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಮೂರೂ ಪಕ್ಷಗಳ ನಾಯಕರು ರೆಸಾರ್ಟ್‍ನಲ್ಲಿ ತಂಗಿದ್ದು, ಕೆಲವರು ಭಾನುವಾರವಾದ ಇಂದು ದೇವಾಲಯಗಳ ಭೇಟಿ ಮಾಡಿದರೆ, ಇನ್ನು ಕೆಲವು ಶಾಸಕರು ಹೋಟೆಲ್‍ನಲ್ಲೇ ಕಾಲ ಕಳೆಯುತ್ತಿದ್ದಾರೆ.
ನಗರದ ಹೊರವಲಯದ ರಾಜಾನುಕುಂಟೆಯ ರಮಡ ರೆಸಾರ್ಟ್‍ನಲ್ಲಿರುವ ಬಿಜೆಪಿ ಶಾಸಕರು ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ. ಹೋಟೆಲ್‍ನಿಂದ ಹೊರಗೆ ಹೋಗಲು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ .ಯಡಿಯೂರಪ್ಪ ಅವರ ಸಮ್ಮತಿಗಾಗಿ ಕಾಯುತ್ತಿದ್ದಾರೆ.
ಸಂಜೆ ನಾಲ್ಕು ಹೊತ್ತಿಗೆ ಯಡಿಯೂರಪ್ಪ ಅವರು ಹೋಟೆಲ್‍ಗೆ ಆಗಮಿಸಿ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com