ಕಾಂಗ್ರೆಸ್ ಪಕ್ಷದ ಮತ್ತೋರ್ವ ಅತೃಪ್ತ ಶಾಸಕ ಮುನಿರತ್ನ ಕೂಡಾ ನಿನ್ನೆ ಮಧ್ಯರಾತ್ರಿಯೇ ಮುಂಬೈ ತಲುಪಿದ್ದಾರೆ. ಸದ್ಯ ದೆಹಲಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಕೂಡಾ ಇಂದು ಮುಂಬೈಗೆ ಪ್ರಯಾಣಿಸಲಿದ್ದು, ಅತೃಪ್ತರ ಗುಂಪು ಸೇರಲಿದ್ದಾರೆ . ಇದರಿಂದಾಗಿ ಅತೃಪ್ತರ ಸಂಖ್ಯೆ 10ರಿಂದ 13ಕ್ಕೆ ಏರಿಕೆಯಾಗಿದ್ದು, ಈ ಗುಂಪಿನಲ್ಲಿ ಹೊಸ ಹುರುಪು ಬಂದಂತಾಗಿದೆ.