ಸಿಎಂ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ: ಬಿಜೆಪಿ ಶಾಸಕರಿಗೆ ವಿಪ್ ಜಾರಿಗೊಳಿಸಿದ ಸಚೇತಕ ಸುನೀಲ್ ಕುಮಾರ್

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗುರುವಾರ ಅಂದರೆ ಜು 18ರಂದು ವಿಧಾನ ಸಭೆಯಲ್ಲಿ ವಿಶ್ವಾಸ ಮತ ...
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ
ಬೆಂಗಳೂರು: ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗುರುವಾರ ಅಂದರೆ ಜು 18ರಂದು ವಿಧಾನ ಸಭೆಯಲ್ಲಿ ವಿಶ್ವಾಸ ಮತ ಯಾಚನೆ ಹಿನ್ನಲೆಯಲ್ಲಿ ಬಿಜೆಪಿ ತನ್ನ ಪಕ್ಷದ ಶಾಸಕರಿಗೆ ಇಂದು ವಿಪ್ ಜಾರಿಮಾಡಿದೆ.
ವಿಧಾನ ಸಭೆ ವಿರೋಧ ಪಕ್ಷದ ಸಚೇತಕ ಸುನೀಲ್ ಕುಮಾರ್ ತಮ್ಮ ಪಕ್ಷದ 105 ಶಾಸಕರಿಗೆ ಇಂದು ವಿಪ್ ಜಾರಿಗೊಳಿಸಿದ್ದಾರೆ. 
ಜುಲೈ 18ರಂದು ಮುಖ್ಯಮಂತ್ರಿ ವಿಶ್ವಾಸ ನಿರ್ಣಯ ಕಲಾಪ ಇದ್ದರೂ ಇಂದೇ ವಿಪ್ ಜಾರಿ ಮಾಡುವ ಮೂಲಕ ರಿವರ್ಸ್ ಆಪರೇಷನ್ ಒಳಗಾಗದಂತೆ ವಿಪ್ ನೀಡಿದೆ. ಒಂದು ವೇಳೆ ರಿವರ್ಸ್ ಆಪರೇಷನ್ ಗೆ  ಒಳಗಾದರೆ ಅವರ ವಿರುದ್ದ ಅನರ್ಹತೆಯ ಅಸ್ತ್ರ ಪ್ರಯೋಗಿಸಲು ವಿಪ್ ಜಾರಿಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com