ಮಂಡ್ಯ: ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿರುವುದನ್ನು ವಿರೋಧಿಸಿ ನೂರಾರು ಜೆಡಿಎಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ಅಣಕು ಶವಯಾತ್ರೆ ನಡೆಸಿ. ಪ್ರತಿಕೃತಿ ದಹಿಸಿದರು, ಅವರ ಮನೆ ಮುಂದೆ ಪ್ರತಿಭಟನೆ ಬರಹಗಳುಳ್ಳ ಬೋರ್ಡ್ ನೇತು ಹಾಕಿದ್ದರು.
12 ಶಾಸಕರ ಜೊತೆಗೆ ರಾಜಿನಾಮೆ ನೀಡಿದ್ದ ನಾರಾಯಣಗೌಡ ಸದ್ಯ ಮುಂಬಯಿಯಲ್ಲಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಟಿ ಮಂಜು ನೇತೃತ್ವದಲ್ಲಿ ಟಿಬಿ ಸರ್ಕಲ್ ನಿಂದ ತಾಲೂಕು ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.