ನಾಳೆ ಏನು ನಡೆಯುತ್ತದೆಯೋ ಎಂಬ ಬಗ್ಗೆ ನನಗೆ ಗೊತ್ತಿಲ್ಲ, ಸ್ಪೀಕರ್ ಕಚೇರಿಯ ಗೌರವವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದರಿಂದಾಗಿ ನನ್ನ ಮೇಲಿನ ಜವಾಬ್ದಾರಿ ಹೆಚ್ಚಿದೆ. ನನ್ನ ನಿರ್ಧಾರದಿಂದ ಯಾರಿಗೆ ಬೇಜಾರಾಗುತ್ತೋ ಅಥವಾ ಸಂತೋಷವಾಗುತ್ತೋ ನನಗೆ ಗೊತ್ತಿಲ್ಲ, ಶಾಸಕರನ್ನು ಸದನಕ್ಕೆ ಕರೆಸುವುದು ನನ್ನ ಜವಾಬ್ದಾರಿಯಲ್ಲ, ಅದು ಆ ಪಕ್ಷಗಳಿಗೆ ಬಿಟ್ಟದ್ದು, ಪಕ್ಷಗಳ ಲೆಕ್ಕಾಚಾರ ನನಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ.,