ಬುಧವಾರ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಗೌಡ ಹಾಗೂ ಗುರುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರ್.ಶಂಕರ್ ವಿರುದ್ಧ ಸ್ಪೀಕರ್ ಅವರಿಗೆ ದೂರು ನೀಡಿದ್ದರು. ದೂರನ್ನಾಧರಿಸಿ ಆರ್.ಶಂಕರ್ ಗೆ ನೋಟೀಸ್ ನೀಡಿರುವ ಸ್ಪೀಕರ್, ಜೂನ್ 16 ರಂದು ನಿಮ್ಮ ಕೈ ಬರಹದಲ್ಲಿ ಬರೆದಿರುವ ಪತ್ರದ ಪ್ರತಿ ನಮ್ಮ ಕೈ ಸೇರಿದೆ. ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆ ವಿಲೀನಗೊಳಿಸಲು ನಿರ್ಧರಿಸಿದ್ದಲ್ಲಿ ಅಂತಹ ವಿಲೀನ ನಿರ್ಣಯವನ್ನು ನಿಮ್ಮ ಪಕ್ಷದ ವತಿಯಿಂದ ನಮಗೆ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.