ಮುಖ್ಯಮಂತ್ರಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್, ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆ ಹಿಂದೆ ಉದ್ದೇಶ ಇರಲಿಕ್ಕಿಲ್ಲ, ರಾಜೀನಾಮೆ ಹಿಂದೆ ದುರುದ್ದೇಶಪೂರಿತ ಉತ್ತೇಜನ ಇದೆಯೆಂದು ಕಾಣಿಸುತ್ತದೆ. ಸರ್ಕಾರವನ್ನು ಕೆಡವುವ ಉದ್ದೇಶವಿದ್ದರೆ ಸಂವಿಧಾನದ ನಿಯಮ ಪ್ರಕಾರ ಸ್ಪೀಕರ್ ತನಿಖೆ ನಡೆಸಬೇಕು. ಶಾಸಕರ ರಾಜೀನಾಮೆ ಸ್ವಯಂಪ್ರೇರಿತತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿದೆ ಎಂದು ನೀಡುವ ಕಾರಣಗಳ ಬಗ್ಗೆ ಸ್ಪೀಕರ್ ತೃಪ್ತರಾಗಬೇಕು ಎಂದು ಹೇಳಿದರು.