ಇಲ್ಲಿಗೆ ಬಂದಾಗ ಶಾಸಕ ಸುರೇಶ್ ಕುಮಾರ್ ತಿಂಡಿ ಬಹಳ ಚೆನ್ನಾಗಿದೆ, ಉಪಾಹಾರ ಸೇವಿಸಿ ಎಂದು ಹೇಳಿದರು. ಅವರು ನನಗೆ ಬಹಳ ಆತ್ಮೀಯರು, ಬೇರೆ ಶಾಸಕರುಗಳ ಜೊತೆ ಸಹ ನಮಗೆ ಒಡನಾಟವಿದೆ. ಇದು ರಾಜಕೀಯವನ್ನು ಮೀರಿದ ಸ್ನೇಹ, ನಾವು ಒಳಗಡೆ ಸದನದಲ್ಲಿ ರಾಜಕೀಯ ವಿಚಾರವಾಗಿ ಏನೇ ಚರ್ಚೆ ಮಾಡಿಕೊಂಡರೂ, ಭಿನ್ನ ಭಿನ್ನ ರೀತಿಯಲ್ಲಿ ವರ್ತಿಸಿಕೊಂಡರೂ ಸಹ ಹೊರಗೆ ಬಂದ ನಂತರ ನಾವೆಲ್ಲರೂ ಸ್ನೇಹಿತರು, ಮಾನವೀಯತೆ ದೃಷ್ಟಿಯಿಂದ ನಾವೆಲ್ಲಾ ನಡೆದುಕೊಳ್ಳುತ್ತೇವೆ, ಅದು ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯ ಕೂಡ, ಇದನ್ನೇ ಪ್ರಜಾಪ್ರಭುತ್ವದ ಸೌಂದರ್ಯ ಎನ್ನುವುದು ಎಂದು ಪರಮೇಶ್ವರ್ ಬಣ್ಣಿಸಿದರು.