ಚಿಕ್ಕ ತಿರುಪತಿಯಲ್ಲಿ ದೇವರಿಗೆ ಕೈಮುಗಿದು ಮೈತ್ರಿ ಸರ್ಕಾರ ಉಳಿದರೆ ಒಂದು ಕೋಟಿ ರೂ. ಅನುದಾನ ಕೊಡಿಸುತ್ತೇನೆ ಎಂದು ಹರಕೆ ಹೊತ್ತು ಬಂದೆ. ಮಾರ್ಗ ಮಧ್ಯೆ ಗುಳ್ಳೇನರಿ ಎಡದಿಂದ ಬಲಕ್ಕೆ ಹೋಯಿತು, ಶುಭ ಶಕುನ ಸರ್ಕಾರ ಉಳಿದುಕೊಳ್ಳುತ್ತದೆ ಎಂದು ತಿಳಿದೆ, ಹೀಗಾಗಿ ತಕ್ಷಣ ನಮ್ಮ ಶಾಸಕ ಬಾಲಕೃಷ್ಣಗೆ ಫೋನ್ ಮಾಡಿ ಹೇಳಿದೆ. ನನ್ನ ಮುಂದೆ ಗುಳ್ಳೆನರಿ ಹೋಯಿತು, ಕುಮಾರಣ್ಣನ ಸರ್ಕಾರ ಉಳಿಯತು ಎಂದೇ, ಆಗಲೇ ಎಂಟಿಬಿ ನಾಗರಾಜ್ ಅವರು ಮುಂಬೈಗೆ ಹಾರಿದ ಎಂದು ಆಕಡೆಯಿಂದ ಉತ್ತರ ಬಂದಿತು. ನನ್ನ ಗುಳ್ಳೆ ನರಿ ಶಾಸ್ತ್ರ ಸುಳ್ಳಾಯಿತು ಎಂದರು ಸದನ ನಗೆಗಡಲಿನಲ್ಲಿ ತೇಲಿತು.