ದೊಮ್ಮಲೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ನಡೆದದ್ದು ಕೇವಲ 2 ದಿನ ಮಾತ್ರ. ಆದರೆ, ವರ್ಷಾನುಗಟ್ಟಲೆ ಕಾಲಹರಣ ಮಾಡಿ ಚರ್ಚೆ ನಡೆದಂತೆ ಬಿಂಬಿಸಲಾಗುತ್ತಿದೆ. ಇಂದು ಸಹ ಚರ್ಚೆ ನಡೆಯಲಿದೆ. ಆದರೆ, ಚರ್ಚೆಗೆ ಸಮಯ ನಿಗದಿ ಮಾಡಿಲ್ಲ, ಆ ಸರ್ವಾಧಿಕಾರ ನನಗಿಲ್ಲ. ಇಂದು ಕುಮಾರಸ್ವಾಮಿ ಸಹ ವಿಶ್ವಾಸ ಮತ ಸಾಬೀತುಪಡಿಸಲು ಒಪ್ಪಿದ್ದಾರೆ. ಹೀಗಾಗಿ ಇಂದು ಬಹುಮತ ಯಾಚನೆ ನಡೆಯಲಿದೆ ಎಂದು ತಿಳಿಸಿದ್ದಾರೆ.