ಬಂಡಾಯ ಶಾಸಕರು ಈಗಲೂ ಕೂಡಾ ಸದನದ ಸದಸ್ಯರಾಗಿದ್ದರೂ ಡಿಕೆ ಶಿವಕುಮಾರ್ ಅವರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ರೆಬೆಲ್ ಶಾಸಕರು ಸದನದಲ್ಲಿ ಭಾಗವಹಿಸಬಹುದು ಅಥವಾ ಗೈರಾಗಬಹುದು. ಅದು ಅವರ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದು, ಯಾರೂ ಕೂಡಾ ಬಲವಂತಪಡಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದಾಗ್ಯೂ, ಮುಂಬೈನಲ್ಲಿರುವ ಬಂಡಾಯ ಶಾಸಕರನ್ನು ಮನಸನ್ನು ಬದಲಾಯಿಸಲು ಡಿಕೆ ಶಿವಕುಮಾರ್ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಶೆಟ್ಟರ್ ಆರೋಪಿಸಿದರು.