ಇಂದು ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಮಾಜಿ ಸಿಎಂ, ನಮ್ಮ ಶಾಸಕರ ಬೆಂಬಲ ಇಲ್ಲದೆ ನೀವು ಸಿಎಂ ಆಗಲು ಸಾಧ್ಯವೇ? ಎಂದು ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು. ಈ ಪಕ್ಷಾಂತರ ಪಿಡುಗಿನ ನಂತರ ರಚನೆಯಾಗುವ ಸರ್ಕಾರ ಸಂಪೂರ್ಣ ಆಡಳಿತ ನಡೆಸಲು ಸಾಧ್ಯವೇ ಇಲ್ಲ. ನಮಗೆ ಈಗ ಆಗಿರುವ ತಂತ್ರ ನಿಮಗೆ ತಿರುಗುಬಾಣವಾಗುತ್ತದೆ. ಯಡಿಯೂರಪ್ಪನವರೇ ನೀವು ಕೂಡ ಸರ್ಕಾರ ರಚಿಸಿದರೆ, ಒಂದು ವರ್ಷ ಕೂಡ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದರು.