ಈ ಹಿಂದೆ ಬಿಜೆಪಿ ಜತೆ ಸೇರಿಕೊಂಡು ಸರ್ಕಾರ ರಚನೆ ಮಾಡಿದ ನಂತರ 20:20 ತಿಂಗಳು ನಂತರ ಅಧಿಕಾರ ಬಿಟ್ಟುಕೊಡಲು ನಾನು ಸಿದ್ದನಿದ್ದೆ. ಆದರೆ ಯಶವಂತ್ ಸಿನ್ಹಾ, ದೇವೇಗೌಡ ಹಾಗೂ ಕೆಲವು ನಾಯಕರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಷರತ್ತು ವಿಧಿಸಿದರು. ಆಗ ಅಧಿಕಾರ ನೀಡದಿರುವ ನಿರ್ಧಾರವನ್ನು ಪಕ್ಷ ತೆಗೆದುಕೊಂಡಿತು. ಆದರೆ ನಾನು ವಚನ ಭ್ರಷ್ಟ ಆಗಿರಲಿಲ್ಲ. ಯಡಿಯೂರಪ್ಪನವರೇ ನಿಮ್ಮ ನಾಯಕರು, ಕಾರ್ಯಕರ್ತರಿಗೆ ಹೇಳಿ ನನ್ನನ್ನು ವಚನ ಭ್ರಷ್ಟ ಎನ್ನಬೇಡಿ. ಆದರೂ ನಾನು ಅಧಿಕಾರ ಹಸ್ತಾಂತರ ಮಾಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.