ತಮ್ಮ ತಂದೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬೇಡಿ,. ನನ್ನನ್ನು ಇಷ್ಟಪಡುವಷ್ಟೇ ನನ್ನ ತಂದೆಯನ್ನು ಇಷ್ಟಪಡಿ, ಯಾವುದೇ ಪಕ್ಷದಿಂದ ಅಥವಾ ಯಾರದೋ ನೆರಳಿನಲ್ಲಿ ನನ್ನ ತಂದೆ ಬೆಳೆಯಲಿಲ್ಲ, ಅವರು ತಮ್ಮ ಸಾಮರ್ಥ್ಯದ ಮೂಲಕ ಬೆಳೆದವರು, ಪ್ರಜಾಪ್ರಭುತ್ವ ಅಸ್ಥಿರಗೊಳಿಸುತ್ತಿದ್ದಾರೆ ಎಂದು ನನ್ನ ತಂದೆಯನ್ನು ದೂರಬೇಡಿ, ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ, ಅವರು ಕೇವಲ ನನ್ನ ತಂದೆ ಎಂಬ ಕಾರಣಕ್ಕೆ ನಾನು ಈ ಮಾತನ್ನು ಹೇಳುತ್ತಿಲ್ಲ, ಅವರು ಯಾವಾಗಲೂ ಒಬ್ಬ ರೈತನಾಗಿ ಗುರುತಿಸಿಕೊಳ್ಳಲು ಬಯಸುತ್ತಾರೆ ಎಂದು ಹೇಳಿದ ಕುಮಾರಸ್ವಾಮಿ ಜೆಡಿಎಸ್ ಸರ್ವೋಚ್ಚ ನಾಯಕ ಎಚ್.ಡಿ ದೇವೇಗೌಡ ಅವರನ್ನು ಸಮರ್ಥಿಸಿಕೊಂಡರು.