"ನಾನು ಪಕ್ಷದ ನಿಯಮಾವಳಿಯನ್ನು ಉಲ್ಲಂಘಿಸಿಲ್ಲದ ಕಾರಣ ನನಗೆ ಈ ತೀರ್ಮಾನ ಅಚ್ಚರಿ ತಂದಿದೆ, ನಾನು ಒಂದು ವಾರ ನನ್ನ ಕ್ಷೇತ್ರದಲ್ಲಿದ್ದೆ. ಬೆಂಗಳೂರಿಗೆ ಇಂದಷ್ಟೇ ಬಂದಿದೇನೆ. ಇಂದು ಬೆಳಿಗ್ಗೆ ನನಗೆ ನನ್ನನ್ನು ಪಕ್ಷದಿಂದ ಹೊರಹಾಕಲ್ಪಟ್ಟಿರುವ ಬಗ್ಗೆ ತಿಳಿಯಿತು. ಇದು ತಪ್ಪು ಭಾವನೆಗಳಿಂದ ಆಗಿರಬಹುದು. ಇಂದಲ್ಲ ನಾಳೆ ಇದು ಸರಿಹೋಗಲಿದೆ, ನನಗೆ ನ್ಯಾಯ ದೊರಕಲಿದ್ದು ನಾನು ಬಿಎಸ್ಪಿಯಲ್ಲಿಯೇ ಉಳಿಯುತ್ತೇನೆ."