ಪಿಎಲ್ ಡಿ ಬ್ಯಾಂಕ್ ಚುನಾವಣೆಗೂ ಮುನ್ನ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ತುಂಬಾ ಆತ್ಮೀಯರಾಗಿದ್ದರು. ಒಂದು ಹಂತದಲ್ಲಿ ರಮೇಶ್ ಜಾರಕಿಹೊಳಿಗೆ ಸಂಪುಟದಲ್ಲಿ ಸ್ಥಾನ ಕೊಡಿಸಲು ಹೆಬ್ಬಾಳ್ಕರ್ ಲಾಬಿ ನಡೆಸಿದ್ದರು,.ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿಯನ್ನು ಕಿತ್ತು ಹಾಕಿ ರಮೇಶ್ ಗೆ ಸ್ಥಾನ ಕೊಡಿಸಲಾಗಿತ್ತು.