ಹೆಚ್ಚಿನ ಬಡ್ಡಿ ವಸೂಲಾತಿ , ಕೈ ಸಾಲ ನೀಡುವುದು, ದಿನ, ವಾರದ ಬಡ್ಡಿಗಳು ಜಮೀನು, ಮನೆ , ವಾಹನ, ಚೆಕ್ ಅಡಮಾನದಂತಹ ಕೃತ್ಯಗಳಿಗೆ ಕಡಿವಾಣ ಬೀಳಲಿದೆ. ಕಾಯ್ದೆ ಜಾರಿಯಾದ ಒಂದು ವರ್ಷದ ಅವಧಿಗೆ ಮಾತ್ರ ಅನ್ವಯವಾಗಲಿದ್ದು, ವಿಭಾಗಾಧಿಕಾರಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಅವರಿಗೆ 90 ದಿನಗಳ ಒಳಗಾಗಿ ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದಲ್ಲಿ ಅದನ್ನು ಅವರು ಪರಿಶೀಲಿಸಿ ಅಡಮಾನ, ಭೋಗ್ಯ, ಕರಾರುಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಂಗಾಮಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.