ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿರುವ ಅವರು, ತುರ್ತು ಕೆಲಸದ ನಿಮಿತ್ತ ಸ್ವ ಕ್ಷೇತ್ರ ಕಾರವಾರಕ್ಕೆ ಆಗಮಿಸಿದ್ದೇನೆ. ಕದ್ದು ಮುಚ್ಚಿ ಬಂದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಲ್ಲಾ ಶಾಸಕರು ಒಟ್ಟಾಗಿದ್ದೇವೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಜೀನಾಮೆ ಕೊಟ್ಟ ದಿನ ತೆಗೆದುಕೊಂಡ ನಿಲುವಿನಲ್ಲೇ ಈಗಲೂ ಇದ್ದೇವೆ. ಯುದ್ಧಕ್ಕೆ ಇಳಿದ ಮೇಲೆ ಹೋರಾಟ ಅನಿವಾರ್ಯ, ನಮ್ಮ ಶಾಸಕ ಸ್ಥಾನದ ಅನರ್ಹತೆಯಾಗಲಿ, ಅಥವಾ ರಾಜೀನಾಮೆ ಅಂಗೀಕಾರವಾಗಲಿ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಯಾವುದೇ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಸಿದ್ಧ. ಎಲ್ಲವೂ ಮೂರ್ನಾಲ್ಕು ದಿನಗಳಲ್ಲಿ ಬಗೆಹರಿಯಲಿದೆ ಎಂದು ಹೇಳಿದರು.