ಆದರೆ ಮುಂದೆ ನಡೆದಿದ್ದೆ ಬೇರೆ. ಫಲಿತಾಂಶ ಪ್ರಕಟವಾಗಿ ಅವರು ಹೇಳಿದ ದಿನವೇ ಕರಾರುವಕ್ಕಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ದೇಶದ ರಾಜಕೀಯ ಚರಿತ್ರೆಯಲ್ಲಿ ಒಬ್ಬ ನಾಯಕ ಅದೂ ಫಲಿತಾಂಶ ಪ್ರಕಟವಾಗುವ ಮೊದಲೇ ನಾನೇ ಮುಂದಿನ ಸಿಎಂ ಎಂದು ಹೇಳಿ, ಅದೂ ಹೇಳಿದ ದಿನವೇ ಕರಾರುವಕ್ಕಾಗಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದು ದೇಶದ ರಾಜಕೀಯ ಬಹಳ, ಬಹಳ ವಿರಳ ಚರಿತ್ರೆ ಇತಿಹಾಸ ಅಂತಹ ಕೀರ್ತಿ ಯಡಿಯೂರಪ್ಪ ನವರ ರಾಜಕೀಯ ಜೀವನದಲ್ಲಿ ಹಾಸುಹೊಕ್ಕಾಗಿತ್ತು ಎಂಬುದನ್ನೂ ಸುಲಭವಾಗಿ ಮರೆಯುವಂತಿಲ್ಲ.