ಉಪಮುಖ್ಯಮಂತ್ರಿ ಹುದ್ದೆಗೆ ಜನ ಈಗಾಗಲೇ ನನ್ನನ್ನು ಗುರುತಿಸಿದ್ದಾರೆ. ನಾನು ಸ್ಥಾನಮಾನಕ್ಕಾಗಿ ದುಡಿಯುವವನಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ. ಪಕ್ಷದ ನಿರ್ಣಯಕ್ಕೆ ಬದ್ಧನಾಗಿದ್ದೇನೆ. ಪಕ್ಷದ ತೀರ್ಮಾನ, ದೇವರ ಇಚ್ಚೆಯಂತೆ ನಡೆಯಲಿ. ನನಗೆ ಪಕ್ಷ ಮುಖ್ಯ, ಹುದ್ದೆಯಲ್ಲ. ಜನರ ಭಾವನೆಗೆ ಬೆಲೆ ಕೊಡುತ್ತೇನೆ. ಆದರೆ, ಪಕ್ಷದ ನಿರ್ಣಯ ಅಂತಿಮವಾಗಿರಲಿದೆ ಎಂದರು.