ಬೆಂಗಳೂರು: ಇಬ್ಬರು ಅತೃಪ್ತ ಶಾಸಕರು ಕರೆ ಮಾಡಿದ್ದು ನಿಜ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ, ಎಂ ಬಿ ಪಾಟೀಲ್ ಹೇಳಿರೋದು ನಿಜ. ಇಬ್ಬರು ಅತೃಪ್ತರು ನನಗೆ ಕರೆ ಮಾಡಿದ್ದರು, ಆದರೆ ನಾನು ಪೋನ್ ರಿಸೀವ್ ಮಾಡಿಲ್ಲ.ಅವರು ತಮ್ಮನ್ನು ಅನರ್ಹತೆ ಮಾಡುತ್ತಾರೆ ಎಂಬ ಭಯದಿಂದ ನನಗೆ ಕರೆ ಮಾಡಿದ್ದರು ಎಂದು ಹೇಳಿದ್ದಾರೆ.
ಅವರ ಫೋನ್ ನಾನು ಯಾಕೆ ರಿಸೀವ್ ಮಾಡಬೇಕು? ಅದು ಮುಖ್ಯವಾದ ವಿಷಯ ಅಲ್ಲ ಎನ್ನುವ ಮೂಲಕ ಅತೃಪ್ತರಿಗೆ ಸ್ಟ್ರಾಂಗ್ಮೆಸೇಜ್ ರವಾನಿಸಿದ್ದಾರೆ ಸಿದ್ಧರಾಮಯ್ಯ.
ಮೂವರು ಶಾಸಕರು ಅನರ್ಹರಾದ ಬೆನ್ನಲ್ಲೇ ಇನ್ನುಳಿದ ಶಾಸಕರಿಗೂ ಅನರ್ಹತೆಯ ಭೀತಿ ಎದುರಾಗಿದೆ, ಹೀಗಾಗಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದರು ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದರು, ಎಂಬಿ ಪಾಟೀಲ್ ಹೇಳಿಕೆಗೆ ಸಿದ್ದರಾಮಯ್ಯ ಸಮರ್ಥನೆ ನೀಡಿದ್ದಾರೆ.