ಬಂಡಾಯ ಶಾಸಕರಲ್ಲಿ ನಾಲ್ಲ್ಕು ಗುಂಪುಗಳಿದೆ. ರಮೇಶ್ ಜಾರಕಿಹೋಳಿ ಗುಂಪು, ಬೆಂಗಳೂರು ಶಾಸಕರ ಬಣ, ಜೆಡಿಎಸ್ ಶಾಸಕರ ಗುಂಪು ಮತ್ತು ಶಾಸಕ ನಾಗೇಂದ್ರ ಬಣ ಇದರಲ್ಲಿ ರಮೇಶ್ ಜಾರಕಿಹೋಳಿ ನೇತೃತ್ವದ ಬಣ ಸರ್ಕಾರದ ವಿರುದ್ಧ ಮೊದಲು ಭಿನ್ನಮತ ಬಹಿರಂಗಪಡಿಸಿದೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಇದು ಒಂದು ದೊಡ್ಡ ಅಂಶವಾಗಿದೆ ಎಂದು ಸತೀಶ್ ಜಾರಕಿಹೋಳಿ ಅಭಿಪ್ರಾಯಪಟ್ಟಿದ್ದಾರೆ.