ನಿಖಿಲ್ ಮುಂದಿನ ನಡೆಯೇನು: ಭವಿಷ್ಯದ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮುಂದಿನ ನಡೆಯೇನು ಎಂಬ ಬಗ್ಗೆ ಎಲ್ಲರಿಗೂ ತೀವ್ರ ಕುತೂಹಲ ...
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮುಂದಿನ ನಡೆಯೇನು ಎಂಬ ಬಗ್ಗೆ ಎಲ್ಲರಿಗೂ ತೀವ್ರ ಕುತೂಹಲ ಮೂಡಿದೆ.
ನಿಖಿಲ್ ಮುಂದಿನ ನಡೆಯೇನು ಎಂದು ಪ್ರಶ್ನಿಸುವವರಿಗೆ , ಮಂಡ್ಯ ನಾಯಕರ ಜೊತೆ ನಿಖಿಲ್ ನಡೆಸಿರುವ ಚರ್ಚೆಯಲ್ಲಿ ಉತ್ತರ ಸಿಕ್ಕಿದೆ. ತಾವು ಮುಂದೆ ಏನು ಮಾಡುತ್ತೇನೆ ಎಂಬ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ನಾನು ಸುಮ್ಮನೆ ಕೂರುವುದಿಲ್ಲ, ಮೊದಲಿಗಿಂತ ತುಂಬಾ ಬದಲಾಗಿದ್ದೇನೆ,ನಾವು ಜನರನ್ನು ಮುಖಾಮುಖಿಯಾಗಿ ಭೇಟಿಯಾದರೇ ಮಾತ್ರ ವಾಸ್ತವತೆ ಅರಿವಾಗುತ್ತದೆ ಎಂಬುದು 8 ತಾಲೂಕುಗಳನ್ನು 45-50 ದಿನ ಸುತ್ತಿದ ಮೇಲೆ ತಿಳಿಯಿತು.  ಇದೇ ರೀತಿ  ಬೇರೆ ಜಿಲ್ಲೆಗಳನ್ನು ಅರ್ಥ ಮಾಡಿಕೊಳ್ಳ ಕಿದೆ. ನಾನು ಕಾರ್ಯಕರ್ತನಾಗಿ ಆ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಹೇಳಿದ್ದಾರೆ.
ಮಂಡ್ಯದಲ್ಲಿ ಎರಡೂವರೆ ಎಕರೆ ನೀರಾವರಿ ಜಮೀನು ಖರೀದಿಸುತ್ತೇನೆ ಎಂದು ಹೇಳಿರುವ ನಿಖಿಲ್, ಮನೆ ಕಟ್ಟಿ ಮುಗಿಯುವವರೆಗೂ ಕಾಯುವುದಿಲ್ಲ ಅಲ್ಲೇ ಶೆಡ್ ಹಾಕಿ ವಾಸಿಸುತ್ತೇನೆ ಎಂದು ಹೇಳಿದ್ದಾರೆ, ಇದರ ಮೂಲಕ ನಾನುಜನರ ಜೊತೆ ಒಡನಾಟ ಬೆಳೆಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com