ರೆಡ್ಡಿ ತಾವು ಸರಣಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ. "ಪಕ್ಷದ ಬಗ್ಗೆ ಅರಿವಿರದ ಹೊಸಬರಿಗೆ ಮಣೆ ಹಾಕಿರುವುದೇ ಕಾಂಗ್ರೆಸ್ನ ಇಂದಿನ ಸ್ಥಿತಿಗೆ ಕಾರಣವಾಗಿದೆ. ಸಚಿವರು, ನಾಯಕರಲ್ಲಿದ್ದ ಅಂಘಟನಾ ಕೊರತೆ, ಕಾರ್ಯಕರ್ತರು-ನಾಯಕರ ನಡುವಿನ ಅಂತರಗಳು ಚುನಾವಣೆಯಲ್ಲಿ ಕಾಂಗ್ರೆಸ್ ಈ ರೀತಿ ಹೀನಾಯ ಸೋಲು ಕಾಣುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.