ಇನ್ನು ಕುಮಾರಸ್ವಾಮಿ ಪಾಲಿಗಿದು ಹೊಸ ಹುದ್ದೆಯೇನೂ ಅಲ್ಲ, ಈ ಹಿಂದೆ ಸಹ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈ ನಡುವೆ ಭವಿಷ್ಯದಲ್ಲಿ ವಿಶ್ವನಾಥ್ ಅವರಿಗೆ ರಾಯ ಸಚಿವ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆ ಬಗೆಗೆ ಸಹ ಊಹಾಪೋಹಗಳು ಕೇಳಿಬಂದಿದೆ.ಸಚಿವ ಸಂಪುಟಕ್ಕೆ ಜೆಡಿಎಸ್ ಇಬ್ಬರು ಶಾಸಕರನ್ನು ನೇಮಕ ಮಾಡಿಕೊಳ್ಳುವದಕ್ಕೆ ಅವಕಾಶವಿದೆ.ಈ ಸಾಧ್ಯತೆ ಬಗೆಗೆ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ಕುಮಾರಸ್ವಾಮಿ ಇತ್ತೀಚೆಗೆ ಸಭೆ ನಡೆಸಿದ್ದರು.