ಬಡವರು, ಹಿಂದುಳಿದವರು, ದಲಿತರ ಪರ ಧ್ವನಿ ಎತ್ತುತ್ತಾನೆ ಎಂಬ ಕಾರಣಕ್ಕಾಗಿ ತಮ್ಮನ್ನು ರಾಜಕೀಯ ಪಕ್ಷಗಳ ವಿರೋಧಿಗಳು ಹಾಗೂ ಸ್ವಪಕ್ಷೀಯರು ಗುರಿ ಮಾಡಿದ್ದಾರೆ. ಡಿ ದೇವರಾಜ ಅರಸು ಅವರ ಜನಪರ ಕೆಲಸಗಳು ಅವರನ್ನು ಕೈ ಹಿಡಿದವು. ಆದರೆ ನಮ್ಮನ್ನು ಜನರು ಕೈಬಿಟ್ಟರು ಎಂಬ ಅರ್ಥದಲ್ಲಿ ಹಾಗೂ ಸ್ವಪಕ್ಷೀಯರ ಟೀಕೆ ಹಾಗೂ ವಿರೋಧ ಕಟ್ಟಿಕೊಳ್ಳುವಂತಾಗಿದೆ ಎಂದು ಸಾಂದರ್ಭಿಕವಾಗಿ, ಸೂಚ್ಯವಾಗಿ ಸಿದ್ದರಾಮಯ್ಯ ತಮಗಾಗುತ್ತಿರುವ ನೋವನ್ನು ವ್ಯಕ್ತಪಡಿಸಿದ್ದಾರೆ.