ಇನ್ನು ಐಎಂಎ ಜ್ಯುವೆಲ್ಸ್ ಅಂಗಡಿ ಮಾಲೀಕರ ಎಸಗಿರುವ ದ್ರೋಹದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಐಎಂಎ ಮೂಲಕ ಜನರಿಗೆ ವಂಚನೆ ಆಗಿರುವುದು ಸ್ಪಷ್ಟವಾಗಿದ್ದು, ಇದು ತೀರಾ ಅನ್ಯಾಯ, ಆತ ಬಂದು ಜನರಿಗೆ ಅವರ ಹಣ ವಾಪಸ್ ಕೊಡಲಿ. ಸಾಮಾನ್ಯ ಜನರಿಗೆ ದ್ರೋಹ ಮಾಡುವ ಕೆಲಸ ಮಾಡಬಾರದು. ವಂಚನೆ ಹಿಂದೆ ರೋಷನ್ ಬೇಗ್ ಅಥವಾ ಮತ್ತೊಬ್ಬರು ಎಂದು ಹೆಸರು ಹೇಳಲು ಬಯಸುವುದಿಲ್ಲ. ಯಾರ ಮೇಲೋ ಆರೋಪ ಮಾಡುವುದನ್ನು ಬಿಟ್ಟು ಸ್ವತಃ ಮಾಲೀಕರೇ ಬಂದು ಜನರಿಗೆ ಹಣ ಕೊಡಲಿ. ಆ ಮಾಲೀಕ ಎಲ್ಲಿದ್ದಾನೆ ಎಂದು ಹುಡುಕುವ ಕೆಲಸ ಮೊದಲು ಆಗಲಿ ಎಂದು ಯಡಿಯೂರಪ್ಪ ಒತ್ತಾಯಿಸಿದರು.