ಬಿಜೆಪಿಯ 25 ಸಂಸತ್ ಸದಸ್ಯರನ್ನು ಜನರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಜನರ ತೀರ್ಪಿಗೆ ವಿರುದ್ಧ ವಾಗಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಅಧಿಕಾರ ನಡೆಸುತ್ತಿದೆ. ನಾವು ಬರ ಪ್ರವಾಸ ಮಾಡದಿದ್ದರೆ ಕುಮಾರಸ್ವಾಮಿ ಸಾಲಮನ್ನಾದ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಒಂದು ವರ್ಷ ಆದರೂ ಕುಮಾರಸ್ವಾಮಿ ಐದಾರು ಸಾವಿರ ಕೋಟಿ ಸಾಲಮನ್ನಾ ಮಾಡಿಲ್ಲ. ರೈತರ, ಜನತೆಯ ಸಂಕಷ್ಟ ಹೆಚ್ಚಾಗುತ್ತಿದೆ. ಈಗ ಕುಮಾರಸ್ವಾಮಿ ಅವರು 45 ಸಾವಿರ ಕೋಟಿ ಅಲ್ಲ, ನಮ್ಮ ಲೆಕ್ಕಾಚಾರ ಸರಿ ಇರಲಿಲ್ಲ, 15-16 ಸಾವಿರ ಕೋಟಿ ರೂ ಅಷ್ಟೇ ರೈತರ ಸಾಲ ಇರುವುದು ಎಂದು ಹೇಳುತ್ತಿದ್ದಾರೆ. ಹೀಗಿದ್ದಾಗ ಅಂದು 45 ಸಾವಿರ ಕೋಟಿ ರೂಪಾಯಿ ಸಾಲ ಎಂದು ಏಕೆ ಹೇಳಿದ್ದು ಎಂದು ಯಡಿಯೂರಪ್ಪ ಪ್ರಶ್ನಿಸಿದರು.