ಸಂಪುಟ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಆರ್, ಶಂಕರ್ ನಾನೊಬ್ಬ ಅವಕಾಶವಾದಿ ರಾಜಕಾರಣಿಯಲ್ಲ,. ಹಾಗೆಂದ ಮಾತ್ರಕ್ಕೆ ನಾನು ಸನ್ಯಾಸಿಯೂ ಅಲ್ಲ, ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ, ಅದನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ ಎಂದಿದ್ದಾರೆ, 2018ರ ಚುನಾವಣೆ ವೇಳೆ ಜೆಡಿಎಸ್,ಮತ್ತು ಬಿಜೆಪಿ ತಮಗೆ ಟಿಕೆಟ್ ಆಫರ್ ನೀಡಿದ್ದವು, ಕಾಂಗ್ರೆಸ್ ನನಗೆ ಟಿಕೆಟ್ ನೀಡಲು ಸಿದ್ಧವಿತ್ತು, ಆದರೆ ಯಾರದ್ದೋ ಪಿತೂರಿಯಿಂದ ಕೈ ತಪ್ಪಿ ಹೋಯಿತು ಎಂದು ಹೇಳಿದ್ದಾರೆ.