ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ರಾಜೀನಾಮೆ ಅಂಗೀಕರಿಸಲು ದೇವೇಗೌಡರ ಮನವೊಲಿಸುತ್ತೇನೆ. ದೇವೇಗೌಡರು ನನ್ನ ಮನವೊಲಿಸುವ ಮೊದಲೇ ಅವರ ಮನವೊಲಿಸುತ್ತೇನೆ. ದೇವೇಗೌಡರು ಊಟಕ್ಕೆ ಕರೆದಿದ್ದಾರೆ ಹೋಗುತ್ತೇನೆ, ಅಲ್ಲಿ ಅವರ ಮನವೊಲಿಸುತ್ತೇನೆ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.