ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ಆರೋಪ ಮಾಡುವುದಕ್ಕಿಂತ ಮೊದಲು ಯಾರಿಗೆ ಆಹ್ವಾನ ಮಾಡಿದರು, ಆಹ್ವಾನಿಸಿದವರ ಹೆಸರೇನು ಎಂದು ಬಹಿರಂಗಪಡಿಸಿದರೆ ಮುಖ್ಯಮಂತ್ರಿಗಳಿಗೂ ಗೌರವ ಬರುತ್ತದೆ. ಇಲ್ಲದಿದ್ದಲ್ಲಿ ಅವರು ತಮ್ಮ ಶಾಸಕರ ಬಗ್ಗೆಯೇ ಅನುಮಾನಪಟ್ಟಂತಾಗುತ್ತದೆ ಎಂದು ತಿರುಗೇಟು ನೀಡಿದರು.