1984 ರಿಂದ ನಾನು ಸಿದ್ದರಾಮಯ್ಯ ಅವರನ್ನು ನೋಡಿದ್ದೇನೆ, ನನ್ನ ಹಾಗೆ ಅವರು 7 ಬಾರಿ ಶಾಸಕರಾಗಿದ್ದಾರೆ, ದೇವೇಗೌಡರಿಂದ ಅವರು ಸಿಎಂ ಆಗಿಲ್ಲ, ಅಹಿಂದ ಚಳುವಳಿ ಆರಂಭಿಸಿದರು, ನಾನು ಅಧಿಕಾರದಾಹಿಯಾಗಿದ್ದೇನೆ ಎಂದು ಹೇಳಿದ್ದಾರೆ, ಅವರ ಜೊತೆ ಈಗ ಅಧಿಕಾರ ಇದೆಯೇ? ಧಾರ್ಮಿಕ ವಿಚಾರದಲ್ಲಿ ಮೂಗು ತೂರಿಸಿದರು, ಅವರ ದುರಹಂಕಾರದ ವರ್ತನೆಗೆ ಒಕ್ಕಲಿಗರು ಅಸಮಾಧಾನ ಗೊಂಡಿದ್ದಾರೆ, ಅಹಿಂದ ಹೆಸರಲ್ಲಿ ಎರಡು ಪ್ರಬಲ ಸಮುದಾಯಗಳ ವಿರುದ್ಧ ವಿಷ ಕಾರುತ್ತಿದ್ದಾರೆ, ನಮ್ಮ ಯಾವುದೇ ಮಾತು ಕೇಳುವುದಿಲ್ಲ, ಸಿದ್ದರಾಮಯ್ಯ ಹಠಾವೋ, ಪಾರ್ಟಿ ಬಚಾವೋ ಎನ್ನುವ ಸಂದೇಶ ಕಳುಹಿಸಿದ್ದಾರೆ,